Friday, September 7, 2007

ಕಲ್ಪನಾ ಛಾಯೆಯಲಿ (ಭಾವಗೀತೆ)

ಕವಿ : ರಾಜಶೇಖರ ಭೂಸ್ನೂರ್ಮಠ್
ಸುರುಳಿ: ದೀಪೋತ್ಸವ
ಸಂಗೀತ, ಗಾಯನ: ಮೈಸೂರು ಅನಂತಸ್ವಾಮಿ

ಕಲ್ಪನಾ ಛಾಯೆಯಲಿ ನಲ್ಮೆಯ ನೌಕೆಯಲಿ
ನೀಲ ಮಣಿ ಹೊಳೆದಂತೆ ಹೊಳೆ ಹೊಳೆದು
ಹೋದೆಯ ಶಕ್ತಿ ತನುಜಾತೆ

ಜಗವೆಲ್ಲ ಮಲಗಿಹುದು
ಚಂದಿರನು ನಗುತಿಹನು
ತಂಗಾಳಿ ಬೀಸುತಿದೆ
ನೀನೆಲ್ಲಿ ಮನದನ್ನೆ
ಕುಂತಳಾ ಶೋಭೆಯೇ

ಆ ಪ್ರಥಮ ದರುಶನದಿ ಮೊಗದ ಚೆಲುವ ತೋರಿ
ನೂಪುರದ ರವ ಬೀರಿ ಮಲ್ಲಿಗೆಯ ನಗೆ ನಕ್ಕೆ
ತನಿ ರಸದಾ ತವರೆ

ಆ ನೋಟ ನುಡಿಯಾಗಿ ಆ ನಗೆಯು ನಗೆಯಾಗಿ
ಆ ನೇಹ ಮಧುವಾಗಿ ಮನದಲ್ಲಿ ಸುಳಿಯುತಿವೆ
ಲಾಸ್ಯ ಪ್ರವೀಣೆ

No comments: