Friday, September 7, 2007

ಆನಂದಮಯ ಈ ಜಗಹೃದಯ (ಭಾವಗೀತೆ)

ಕವಿ : ಕುವೆಂಪು
ಸುರುಳಿ: ಭಾವಬಿಂದು
ಸಂಗೀತ : ಸಿ.ಅಶ್ವಥ್
ಗಾಯನ : ಶಿವಮೊಗ್ಗ ಸುಬ್ಬಣ್ಣ

ಆನಂದಮಯ ಈ ಜಗಹೃದಯ
ಏತಕೆ ಭಯ ಮಾಣೊ

ಸೂರ್ಯೋದಯ ಚಂದ್ರೋದಯ
ದೇವರ ದಯ ಕಾಣೊ

ಬಿಸಿಲಿದು ಬರೀ ಬಿಸಿಲಲ್ಲವೊ
ಸೂರ್ಯನ ಕೃಪೆ ಕಾಣೊ
ಸೂರ್ಯನು ಬರೀ ರವಿಯಲ್ಲವೊ
ಆ ಭ್ರಾಂತಿಯ ಮಾಣೊ

ರವಿವದನವೇ ಶಿವಸದನವೊ
ಬರೀ ಕಣ್ಣದೊ ಮಣ್ಣೊ
ಶಿವನಿಲ್ಲದೆ ಸೌಂದರ್ಯವೇ
ಶವ ಮುಖದ ಕಣ್ಣೊ

ಉದಯದೊಳೇನ್ ಉದಯವ ಕಾಣ್
ಅದೇ ಅಮೃತದ ಹಣ್ಣೊ
ಶಿವ ಕಾಣದೆ ಕವಿ ಕುರುಡನೋ
ಶಿವ ಕಾವ್ಯದ ಕಣ್ಣೊ

ನಿನ್ನ ಕ೦ಗಳ ಕೊಳದಿ (ಭಾವಗೀತೆ)

ಕವಿ : ಎಂ.ಎನ್. ವ್ಯಾಸರಾವ್
ಸಂಗೀತ: ಅಶ್ವತ್ಥ್
ಗಾಯನ: ರತ್ನಮಾಲಾ ಪ್ರಕಾಶ್

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು ||೨||
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ಎದೆಗೆ ತಾಪದ ಉಸಿರು ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆಯ ನಗೆಯು ಛೇಡಿಸಿಹುದು ||೨||
ಬಳಿಗೆ ಬಾರದೆ ನಿ೦ತೆ ಹೃದಯ ತು೦ಬಿದೆ ಚಿ೦ತೆ ||೨||
ಜೀವ ನಿನ್ನಾಸರೆಗೆ ಕಾಯುತಿಹುದು

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು

ನಾನೊ೦ದು ದಡದಲ್ಲಿ ನೀನೊ೦ದು ದಡದಲ್ಲಿ||೨||
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ಎ೦ದು ಬರುವುದೊ ಕಾಣೆ||೨||
ನೀನಿರುವ ಬಳಿಯಲ್ಲಿ ನನ್ನ ಬಿಡಲು

ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು
ನಿನ್ನ ಕ೦ಗಳ ಕೊಳದಿ ಬೆಳದಿ೦ಗಳಿಳಿದ೦ತೆ
ನನ್ನೆದೆಯ ಕಡಲೇಕೆ ಬೀಗುತಿಹುದು
ನನ್ನೆದೆಯ ಕಡಲೇಕೆ ಬೀಗುತಿಹುದು
ನನ್ನೆದೆಯ ಕಡಲೇಕೆ ಬೀಗುತಿಹುದು

ಕಲ್ಪನಾ ಛಾಯೆಯಲಿ (ಭಾವಗೀತೆ)

ಕವಿ : ರಾಜಶೇಖರ ಭೂಸ್ನೂರ್ಮಠ್
ಸುರುಳಿ: ದೀಪೋತ್ಸವ
ಸಂಗೀತ, ಗಾಯನ: ಮೈಸೂರು ಅನಂತಸ್ವಾಮಿ

ಕಲ್ಪನಾ ಛಾಯೆಯಲಿ ನಲ್ಮೆಯ ನೌಕೆಯಲಿ
ನೀಲ ಮಣಿ ಹೊಳೆದಂತೆ ಹೊಳೆ ಹೊಳೆದು
ಹೋದೆಯ ಶಕ್ತಿ ತನುಜಾತೆ

ಜಗವೆಲ್ಲ ಮಲಗಿಹುದು
ಚಂದಿರನು ನಗುತಿಹನು
ತಂಗಾಳಿ ಬೀಸುತಿದೆ
ನೀನೆಲ್ಲಿ ಮನದನ್ನೆ
ಕುಂತಳಾ ಶೋಭೆಯೇ

ಆ ಪ್ರಥಮ ದರುಶನದಿ ಮೊಗದ ಚೆಲುವ ತೋರಿ
ನೂಪುರದ ರವ ಬೀರಿ ಮಲ್ಲಿಗೆಯ ನಗೆ ನಕ್ಕೆ
ತನಿ ರಸದಾ ತವರೆ

ಆ ನೋಟ ನುಡಿಯಾಗಿ ಆ ನಗೆಯು ನಗೆಯಾಗಿ
ಆ ನೇಹ ಮಧುವಾಗಿ ಮನದಲ್ಲಿ ಸುಳಿಯುತಿವೆ
ಲಾಸ್ಯ ಪ್ರವೀಣೆ

Monday, September 3, 2007

ಈ ಸಂಜೆ ಯಾಕಾಗಿದೆ (ಗೆಳೆಯ)

ಚಿತ್ರ: ಗೆಳೆಯ
ನಿರ್ದೇಶನ: ಹರ್ಷ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಸಂಗೀತ: ಮನೋ ಮೂರ್ತಿ

ಈ ಸಂಜೆ ಯಾಕಾಗಿದೆ ನೀನಿಲ್ಲದೆ
ಈ ಸಂಜೆ ಯಾಕಾಗಿದೆ..//೧//
ಈ ಸಂತೆ ಸಾಕಾಗಿದೆ ನೀನಿಲ್ಲದೆ
ಈ ಸಂತೆ ಸಾಕಾಗಿದೆ..
ಏಕಾಂತವೇ ಆಲಾಪವೂ ಏಕಾಂಗಿಯಾ ಸಲ್ಲಾಪವೂ
ಈ ಮೌನ ಬಿಸಿಯಾಗಿದೆ ಓ...ಈ ಮೌನ ಬಿಸಿಯಾಗಿದೆ // ಈ ಸಂಜೆ..//

ಲಾ ಲಾ ಲ ಲ ಲಾ ಲ ಲಾ ಲಾ....

ಈ ನೋವಿಗೆ ಕಿಡೀ ಸೋಕಿಸಿ ಮಜ ನೋಡಿವೇ ತಾರಾಗಣ
ತಂಗಾಳಿಯ ಪಿಸುಮಾತಿಗೆ ಯುಗವಾಗಿದೇ ನನ್ನಾ ಕ್ಷಣಾ
ನೆನಪೆಲ್ಲವೂ ಹೂವಾಗಿದೆ ಮೈ ಎಲ್ಲವೂ ಮುಳ್ಳಾಗಿದೆ
ಈ ಜೀವ ಕಸಿಯಾಗಿದೇ..ಈ ಜೀವ ಕಸಿಯಾಗಿದೇ ..// ಈ ಸಂಜೆ..//

ಆ ಆ ಆ...ಆ ಆ ಆ..

ನೀನಿಲ್ಲದೇ ಆ ಚಂದಿರಾ ಈ ಕಣ್ಣಲೀ ಕಸವಾಗಿದೇ
ಅದನೂದುವಾ ಉಸಿರಿಲ್ಲದೇ ಬೆಳದಿಂಗಳು ಅಸುನೀಗಿದೇ
ಆಕಾಶದೀ ಕಲೆಯಾಗಿದೇ ಈ ಸಂಜೆಯಾ ಕೊಲೆಯಾಗಿದೇ
ಈ ಗಾಯ ಹಸಿಯಾಗಿದೇ...ಈ ಗಾಯ ಹಸಿಯಾಗಿದೇ ..// ಈ ಸಂಜೆ.. //