Thursday, August 30, 2007

ಯಾರು ತಿಳಿಯರು (ಬಭ್ರುವಾಹನ)

ಚಿತ್ರ : ಬಭ್ರುವಾಹನ
ಸಂಗೀತ: ಟಿ.ಜಿ. ಲಿಂಗಪ್ಪ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಗಾಯನ: ರಾಜ್ ಕುಮಾರ್, ಪಿ.ಬಿ.ಶ್ರೀನಿವಾಸ್
ವರ್ಷ : ೧೯೭೭

ಬಭ್ರುವಾಹನ:
ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮಾ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ.. ಆ... ಆ .. ಆ..

ಅರ್ಜುನ:
ಅಸಹಾಯ ಶೂರ ನಾ ಅಕ್ಷೀಣ ಬಲನೋ
ಹರನೊಡನೆ ಹೋರಾಡಿ ಪಾಶುಪತವಂ ಪಡೆದವನೋ
ಆಗ್ರಹದೊಳೆದುರಾಗೊ ಅರಿಗಳಂ ನಿಗ್ರಹಿಸೋ ವ್ಯಾಘ್ರನಿವನೋ
ಉಗ್ರಪ್ರತಾಪೀ.. ಈ...

ಬಭ್ರುವಾಹನ:
ಓ ಹೊ ಹೋ ಹೊ ಉಗ್ರಪ್ರತಾಪಿ ಆಂ!
ಸಭೆಯೊಳಗೆ ದ್ರೌಪತಿಯ ಸೀರೆಯನು ಸೆಳೆವಾಗ ಎಲ್ಲಿ ಅಡಗಿತ್ತೋ ಈ ನಿನ್ನ ಶೌರ್ಯ
ನೂಪುರಂಗಳ ಕಟ್ಟಿ ನಟಿಸಿ ತಕಥೈಯೆಂದು ನಾಟ್ಯ ಕಲಿಸಿದ ನಪುಂಸಕ ನೀನು
ಚಕ್ರವ್ಯೂಹದೆ ನುಗ್ಗಿ ಛಲದಿಂದ ಛೇದಿಸದೆ ಮಗನನ್ನು ಬಲಿ ಕೊಟ್ಟ ಭ್ರಷ್ಟಾ ನೀನು
ಗಂಡುಗಲಿಗಳ ಗೆಲ್ಲೊ ಗುಂಡಿಗೆಯು ನಿನಗೆಲ್ಲೋ
ಖಂಡಿಸಿದೇ ಉಳಿಸುವೆ
ಹೋಗೊ ಹೋಗೆಲೋ ಶಿಖಂಡೀ ..ಈ ...

ಅರ್ಜುನ:
ಫಡ ಫಡ ಶಿಖಂಡಿಯೆಂದಡಿಗಡಿಗೆ ನುಡಿಯ ಬೇಡೆಲೋ ಮೂಢ
ಭಂಡರೆದೆ ಗುಂಡಿಗೆಯ ಖಂಡಿಸುತಾ ರಣಚಂಡಿಗೌತಣವೀವ ಈ ಗಾಂಡೀವಿ
ಗಂಡುಗಲಿಗಳ ಗಂಡ ಉದ್ಧಂಡ ಭೂಮಂಡಲದೊಳಖಂಡ ಕೀರ್ತಿ ಪ್ರಚಂಡ .. ಆ...

ಬಭ್ರುವಾಹನ:
ಚಂಡನೋ ಪ್ರಚಂಡನೋ ಪುಂಡನೋ ನಿರ್ಧರಿಸುವುದು ರಣರಂಗ
ಹೂಡು ಬಾಣಗಳ ಮಾಡುವೆ ಮಾನಭಂಗ

ಅರ್ಜುನ:
ಕದನದೋಳ್ ಕಲಿಪಾರ್ಥನಂ ಕೆಣಕಿ ಉಳಿದವರಿಲ್ಲ

ಬಭ್ರುವಾಹನ:
ಅಬ್ಬರಿಸಿ ಭೊಬ್ಭಿರಿದರಿಲ್ಲಾರಿಗೂ ಭಯವಿಲ್ಲ

ಅರ್ಜುನ:
ಆರ್ಭಟಿಸಿ ಬರುತಿದೆ ನೋಡು ಅಂತಕನ ಆಹ್ವಾನ

ಬಭ್ರುವಾಹನ:
ಅಂತಕನಿಗೆ ಅಂತಕನು ಈ ಬಭ್ರುವಾಹನ

Wednesday, August 29, 2007

ನಿನ್ನಿಂದಲೇ ನಿನ್ನಿಂದಲೇ (ಮಿಲನ)

ಚಿತ್ರ:ಮಿಲನ
ನಿರ್ದೇಶನ : ಪ್ರಕಾಶ್
ಸಂಗೀತ : ಮನೋ ಮೂರ್ತಿ
ಸಾಹಿತ್ಯ : ಜಯಂತ್ ಕಾಯ್ಕಿಣಿ

ನಿನ್ನಿಂದಲೇ ನಿನ್ನಿಂದಲೇ
ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ
ನನ್ನೆದುರಲ್ಲಿ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವಾ ಹಂಬಲಾ
ನಾ ನಿಂತಲ್ಲೇ ಹಾಡಾದೆ ನಿನ್ನಿಂದಲೇ ||ನಿನ್ನಿಂದಲೇ ||

ಇರುಳೆಲ್ಲಾ ಜ್ವರದಂತೆ ಕಾಡಿ
ಈಗ ಹಾಯಾಗಿ ನಿಂತಿರುವೆ ಸರಿಯೇನು?
ಬೇಕಂತಲೇ ಮಾಡಿ ಏನೋ ಮೋಡಿ
ಇನ್ನೆಲ್ಲೋ ನೋಡುವ ಪರಿಯೇನು
ಈ ಮಾಯೆಗೆ ಈ ಮರುಳಿಗೆ
ನಿನ್ನಿಂದ ತಡೆಬಂದಿದೇ ||ನಿನ್ನಿಂದಲೇ ||


ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನಾ
ಸೊಂಪಾದ ನಗುವಿನ ಗುಣಗಾನ
ಕೇದಿಗೆ ಗರಿಯಂಥ ನಿನ್ನಾ ನೋಟ
ನನಗೇನೋ ಅಂದಂತೆ ಅನುಮಾನ
ಕಣ್ಣಿಂದಲೇ ಸದ್ದಿಲ್ಲದೇ ಮುದ್ದಾದ ಕರೆ ಬಂದಿದೇ ||ನಿನ್ನಿಂದಲೇ ||

ನೂರೂ ಜನ್ಮಕೂ

ಚಿತ್ರ: ಅಮೇರಿಕಾ ಅಮೇರಿಕಾ
ನಿರ್ದೇಶನ, ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಸಂಗೀತ: ಮನೋ ಮೂರ್ತಿ

ನೂರೂ ಜನ್ಮಕೂ...
ನೂರೂ ಜನ್ಮಕೂ ನೂರಾರೂ ಜನ್ಮಕೂ
ನೂರೂ ಜನ್ಮಕೂ ನೂರಾರೂ ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದೂ ಬಾರೆಲೇ
ನನ್ನಾ ಆತ್ಮ ನನ್ನಾ ಪ್ರಾಣ ನೀನೆಂದೂ
ನೂರು ಜನ್ಮಕೂ...

ಬಾಳೆಂದರೇ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದೀ ಓಹೋಹೋ
ನನ್ನೆದೆಯ ಬಾಂದಳದೀ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲೀ ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೇ

ನೂರೂ ಜನ್ಮಕೂ...

ಬಾ ಸಂಪಿಗೆ ಸವಿಭಾವಲಹರೀ ಹರಿಯೇ
ಪನ್ನೀರ ಜೀವನದೀ
ಬಾ ಮಲ್ಲಿಗೆ ಮಮಕಾರ ಮಾಯೇ
ಲೋಕದಾ ಸುಖವೆಲ್ಲಾ ಓಹೋಹೊ
ಲೋಕದಾ ಸುಖವೆಲ್ಲಾ ನಿನಗಾಗಿ ಮುಡಿಪಿರಲೀ
ಇರುವಂಥ ನೂರು ಕಹೀ
ಇರಲಿರಲಿ ನನಗಾಗಿ
ಕಾಯುವೆನೂ ಕೊನೆವರೆಗೂ ಕಣ್ಣಾಗಿ

ನೂರೂ ಜನ್ಮಕೂ...

ಕೂರಕ್ ಕುಕ್ಕ್ರಳ್ಳಿ ಕೆರೆ

ಚಿತ್ರ: ನೆನಪಿರಲಿ
ನಿರ್ದೇಶನ: ರತ್ನಜ
ಸಂಗೀತ, ಸಾಹಿತ್ಯ: ಹಂಸಲೇಖ
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಅರೆ ಯಾರ್ರೀ ಹೆದರ್ ‍ಕೊಳ್ಳೋರು...ಬೆದರ್ ‍ಕೊಳ್ಳೋರು
ಪೇಚಾಡೋರು, ಪರ‍ದಾಡವ್ರು,
ಮರಗಳ್ ಮರೆನಲ್ಲಿ ಮಾತಾಡವ್ರು,
ಮಾರ್ನಿಂಗ್ ಶೋನಲ್ಲಿ ಪಿಸ್ಗುಟ್ಟವ್ರು
ಮೈಸೂರ್ ಅಂತಾ ಜಿಲ್ಲೇಲಿದ್ದೂ
ಕಣ್ಣಿಗ್ ಬೇಕಾದ್ ನೋಟ ಇದ್ದೂ
ಹಳೆ ರಾಜ್ರ್ರು ಅಪ್ಣೆ ಇದ್ದೂ
ಪ್ರೀತಿ ಮಾಡೋಕ್ ಜಾಗ್ಗುಳ್ ಇದ್ದೂ
ಕದ್ದು ಮುಚ್ಚಿ ಓಡಾಡ್ತೀರಲ್ರೀ
ಬನ್ರೀ.. ನೋಡ್ರೀ... ನಾನ್ ಲವ್ ಮಾಡೊ ಸ್ಟೈಲ್ ಸ್ವಲ್ಪ ಕಲೀರೀ.....!

ಕೂರಕ್ ಕುಕ್ಕ್ರಳ್ಳಿ ಕೆರೆ...ವಾ ವಾ
ತೇಲಕ್ ಕಾರಂಜಿ ಕೆರೆ...ವಾ ವಾ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಮ್ ಲವ್ವಿಗೆ
ಈ ಭಯ ಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.

ಬಲ್ ಮುರೀಲಿ ಪೂಜೆ ನೆಪ
ಎಡ್ ಮುರೀಲಿ ಜಪ ತಪ ||೨||
ಲವ್ವಿಗೆ ನಿರ್ವಿಘ್ನ ಲವ್ವಿಗೆ

ನಾರ್ತಿನಲ್ಲಿ ಶ್ರೀರಂಗ್‍ಪಟ್ಣ
ಸೌತಿನಲ್ಲಿ ನಂಜನ್‍ಗೂಡು ..ಪೂಜೆಗೇ....ಲವ್ ಪೂಜೆಗೇ
ಈ ಭಯ ಬಿಸಾಕೀ...ಲವ್ ಮಾಡಿ..ಲವ್ ಮಾಡಿ..ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಗಲಾಟೆನೇ ಇಲ್ಲ ಬನ್ರೀ ||೨|| ಗಂಗೊತ್ರಿಯಲ್ಲಿ
ಮನಸ್ಸು ಬಿಚ್ಕೊಳ್ರೀ , ಮರಮರ ಮರದ ಮರೇಲೀ
ಅರ್‍ಮನೆಲಿ ಅಡ್ಡಾಡುತ ||೨|| ಮೂಡು ತಗೊಳ್ರೀ
ರಾಜ್ರ ತರಾನೇ ಲವ್ವಲ್ ದರ್ಬಾರ್ ಮಾಡ್ಬಿಡ್ರೀ

ಹೇ ರಂಗಂತಿಟ್ಟು ನೋಡಿಬಿಟ್ಟು ಹಾಡ್ರಿ ಮುತ್ತಿಟ್ಟು
ಮುಡುಕತೋರೆಲ್ ಮನಸು ಕೊಡ್ರಿ ಕಣ್ಣಲ್ ಕಣ್ಣಿಟ್ಟು

ಕಾಳಿದಾಸನೆ ಇಲ್ ರಸ್ತೆ ಆಗವ್ನೆ
ಪ್ರೀತಿ ಮಾಡೋವ್ರ್ ಗೆ ಸರಿ ದಾರಿ ತೋರ್‍ತಾನೆ

ಕೆ.ಆರ್.ಎಸ್ ಅಲ್ಲಿ ಕೆಫೆ ಮಾಡಿ, ಬ್ಲಫ್ಫಿನಲ್ಲಿ ಬಫೆ ಮಾಡಿ
ಲವ್ವಿಗೆ ರಿಚ್ ಲವ್ವಿಗೆ
ದುಡ್ಡಿದ್ರೆ ಲಲಿತ ಮಹಲ್, ಇಲ್ದಿದ್ರೆ ಒಂಟಿ ಕೊಪ್ಪಲ್
ಲವ್ವಿಗೆ ಈ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ.
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಜಾತಿ ಬಿಟ್ರು ಸುಖ ಪಡ್ಬೇಕ್, ||೨|| ಪ್ರೀತಿ ಮಾಡಮ್ಮ
ನಾಳೆ ಆಗೋದು ಇಂದೇ ಆಗಿ ಹೋಗ್ಲಮ್ಮಾ
ಕದ್ದು ಮುಚ್ಚಿ ಪ್ರೀತಿ ಮಾಡೋದ್ ||೨|| ಕಳ್ಳ ಲವಮ್ಮ
ಸತ್ಯ ಹೇಳಮ್ಮ, ನಿಜವಾದ್ ಪ್ರೀತಿ ಮಾಡಮ್ಮಾ
ಜಾತಿ ಸುಡೋ ಮಂತ್ರ ಕಿಡಿ, ಪ್ರೀತಿ ಕಣಮ್ಮಾ
ಮನುಜ ಮತ ವಿಶ್ವಪಥ ಅಂಥ ಹೇಳಮ್ಮಾ
ತೀರ್ಥಹಳ್ಳೀಲಿ ಕುವೆಂಪು ಹುಟ್ಟಿದ್ರು
ವಿಶ್ವಪ್ರೇಮನಾ ಮೈಸೂರ್‍ಗೆ ತಂದ್ ಕೊಟ್ರು

ಮೈಸೂರೂ ಕೂಲಾಗಿದೆ, ಬೃಂದಾವನ ಗ್ರೀನಾಗಿದೆ ಲವ್ವಿಗೇ...ಸ್ವೀಟ್ ಲವ್ವಿಗೇ
ನರಸಿಂ‍ಸ್ವಾಮಿ ಪದ್ಯ ಇದೆ
ಅನಂತ್‍ಸ್ವಾಮಿ ವಾದ್ಯ ಇದೆ
ಸಾಂಗಿಗೆ ಲವ್ ಸಾಂಗಿಗೆ

ಈ ಭಯ ಬಿಸಾಕೀ ಲವ್ ಮಾಡಿ ಲವ್ ಮಾಡಿ ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ

ಕೂರಕ್ ಕುಕ್ಕ್ರಳ್ಳಿ ಕೆರೆ
ತೇಲಕ್ ಕಾರಂಜಿ ಕೆರೆ ||೨||
ಲವ್ವಿಗೇ ಈ ಲವ್ವಿಗೇ
ಚಾಮುಂಡಿ ಬೆಟ್ಟ ಇದೆ
ಕನ್ನಂಬಾಡಿ ಕಟ್ಟೆ ಇದೆ ಲವ್ವಿಗೆ ನಂ ಲವ್ವಿಗೆ
ಈ ಭಯಬಿಸಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ
ಈ ದಿಗಿಲ್ ದಬ್ಬಾಕೀ, ಲವ್ ಮಾಡಿ, ಲವ್ ಮಾಡಿ, ಲವ್ ಮಾಡಿ!!!!

ನೀನೆ ನೀನೆ ನನಗೆಲ್ಲಾ ನೀನೆ

ಚಿತ್ರ: ಆಕಾಶ್
ನಿರ್ದೇಶನ: ಮಹೇಶ್ ಬಾಬು
ಸಂಗೀತ : ಆರ್. ಪಿ. ಪಟ್ನಾಯಕ್
ಸಾಹಿತ್ಯ: ಕಲ್ಯಾಣ್
ಗಾಯನ: ಕುನಾಲ್ ಗಾಂಜಾವಾಲ

ನೀನೆ ನೀನೆ ನನಗೆಲ್ಲಾ ನೀನೆ
ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬ ನಿನ್ನ ಪ್ರೀತಿ ತಾನೆ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೆ

ಮಳೆಯಲ್ಲು ನಾ ಬಿಸಿಲಲ್ಲೂ ನಾ ಚಳಿಯಲ್ಲೂ ನಾ ಜೊತೆ ನಡೆಯುವೆ
ಹಸಿವಲ್ಲೂ ನಾ ನೋವಲ್ಲು ನಾ ಸಾವಲ್ಲು ನಾ ಜೊತೆ ನಿಲ್ಲುವೆ
ನಾನಾ ದೇಶ ನಾನಾ ವೇಷ ಯಾವುದಾದರೇನು
ಒಪ್ಪಿಕೊಂಡ ಈ ಮನಸುಗಳೆರಡು ಎಂದು ಹಾಲು ಜೇನು

ನೀನೆ ನೀನೆ ನೀನೆ ನೀನೆ ||ನೀನೆ ನೀನೆ ನನಗೆಲ್ಲಾ ನೀನೆ||

ಕ್ಷಣವಾಗಲಿ ದಿನವಾಗಲಿ ಯುಗವಾಗಲಿ ನಾ ಕಾಯುವೆ
ಕಲ್ಲಾಗಲಿ ಮುಳ್ಳಾಗಲಿ ನಿನ್ನ ಬದುಕಲಿ ಬೆಳಕಾಗುವೆ
ಏನೇ ಆಗಲಿ ಪ್ರಾಣಾ ಹೋಗಲಿ ನನಗೆ ನೀನೇ ಬೇಕು
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕು

ನೀನೆ ನೀನೆ ನೀನೆ ನೀನೆ ||ನೀನೆ ನೀನೆ ನನಗೆಲ್ಲಾ ನೀನೆ ||

ಸವಿಯೊ ಸವಿಯೊ

ಚಿತ್ರ: ಸವಿ ಸವಿ ನೆನಪು
ನಿರ್ದೇಶನ: ಸಂತೋಷ್ ರೈ ಪಾತಾಜೆ
ಸಂಗೀತ: ಆರ್. ಪಿ. ಪಟ್ನಾಯಕ್
ಸಾಹಿತ್ಯ: ನಾಗತಿಹಳ್ಳಿ ಚಂದ್ರಶೇಖರ್
ಗಾಯನ: ಸೋನು ನಿಗಮ್, ಶ್ರೇಯಾ ಘೋಷಾಲ್

ನಾಯಕಿ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ
ನಾಯಕ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ..

ನಾಯಕ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..
ನಾಯಕಿ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..

ನಾಯಕ: ಸೂರ್ಯನಂತೆ ನಾ ಹೊಳೆವಾಗ
ಭೂಮಿಯಂತೆ ನೀ ಬಾ..
ನಾಯಕಿ: ಭೂಮಿಯಂತೆ ನಾ ಕರೆವಾಗ
ಮಳೆ ಬಿಲ್ಲಂತೆ ನೀ ಬಾ..

ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ

..


ನಾಯಕಿ: ನೀ ಬರುವ ದಾರಿಯಲ್ಲಿ
ಒಲವೆಂಬ ರಂಗವಲ್ಲಿ..
ನಿನಗಾಗಿ ಮೂಡಿದೆ ನೋಡು ಬಾ
ನಾಯಕ: ಹೆಯ್ ಹೆಯ್ ಹೇ. ಒಡಲಾಳ ತಂತು ಸ್ನೇಹ
ಒಡಮೂಡಿ ಬಂತು ಮೋಹ..
ಕತೆಯಾಗಿ ಕಾಡಿತು ಮೂಡಿತು..
ನಾಯಕಿ: ನೀ ಗದ್ಯಾದೋಳದ್ದೀದ ಪದ್ಯಾದ ಮಧ್ಯದ ಅದ್ಭುತ ಭಾವಾರ್ಥವೆ..
ನಾಯಕ: ನೀ ಗದ್ಯಾದೋಳದ್ದೀದ ಪದ್ಯಾದ ಮಧ್ಯದ ಅದ್ಭುತ ಭಾವಾರ್ಥವೆ..

ಸವಿಯೊ..

ನಾಯಕ: ಮರುಭೂಮಿಯಾನದಲ್ಲಿ
ಅಮೃತದ ಧಾರೆ ಚೆಲ್ಲಿ
ತಂಪಾಯ್ತು ಜೀವಕೆ ಭಾವಕೆ..
ನಾಯಕಿ: ಹಾ ಹಾ ಮುಂಜಾನೆ ಮಂಜಿನಲ್ಲು
ಚುಮುಗುಡುವ ಬೆಳಗಿನಲ್ಲು
ಬಿಸಿಯಾಯ್ತು ಮಯ್ಯಿಗು ಮನಸಿಗೂ..
ನಾಯಕ: ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಹೆಣ್ಣಲ್ಲವೇ..
ನಾಯಕಿ: ನೀ ಬೆಚ್ಚನೆ ಪ್ರೀತಿಯ ಹುಚ್ಚಿನ ಮೆಚ್ಚಿನ ಇಚ್ಛೆಯ ಗಂಡಲ್ಲವೇ..


ನಾಯಕಿ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ
ನಾಯಕ: ಸವಿಯೊ ಸವಿಯೊ .. ಒಲವ ನೆನಪು
ಎದೆಯ ನಿಧಿಯೆ ಅನುರಾಗ..

ನಾಯಕ:ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..
ನಾಯಕಿ: ಪ್ರತಿಕ್ಷಣದಲಿ ಪ್ರಾರ್ಥನೆಯಲಿ ಕಾಡುವೆ ಏತಕೆ..

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ

ಚಿತ್ರ : ಹುಡುಗಾಟ
ನಿರ್ದೇಶನ: ಸಂಜಯ್
ಸಾಹಿತ್ಯ : ಕವಿರಾಜ್
ಸಂಗೀತ : ಜೆಸ್ಸಿ ಗಿಫ್ಟ್
ಗಾಯಕರು : ಜಾರ್ಜ್ ಪೀಟರ್, ಜೆಸ್ಸಿ ಗಿಫ್ಟ್, ಪ್ರಸನ್ನ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಗೆಲುವೆ ನನ್ನಯ ಲೈಫಿನ ಫ್ಯಾಶನ್
ನನಗೆ ಇಲ್ಲವೊ ಯಾವುದೆ ಟೆಂಶನ್
ನಗಿಸಿ ನಗುವುದೆ ನಮ್ಮಯ ಫ್ಯಾಶನ್
ಎಲ್ಲೆ ಹೋದರು ನಾವ್ ಸೆಂಸೇಶನ್

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಕೈತುಂಬಾ ಕಾಸಿದ್ರೆ ಮೈತುಂಬಾ ಜೋಶಿದ್ರೆ
ಜಗವೆಲ್ಲ ಜೇಬಲ್ಲಿ ಸ್ವರ್ಗಾನೆ ಅಂಗೈಲಿ
ಆ ಸೂರ್ಯ ಬಾನಲ್ಲಿ ಹುಟ್ತಾನೆ ನಮ್ ಕೇಳಿ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ

ಉಳಿಯೋಕೆ ೫ ಸ್ಟಾರು ಸುತ್ತೇಲ್ಲ ಹುಡುಗೀರು
ಲೈಫಲ್ಲಿ ಗ್ಲಾಮ್ಮರ್ರು ಇದ್ರ್‍ಏನೆ ಸೂಪರ್ರು
ನಾನೇನೆ ಮಾಡಿದ್ರು ನನ್ಯಾರು ಕೇಳೋರು

ಸ್ಟೈಲೊ ಸ್ಟೈಲೊ ಚಿಕಲಕಚಿಕ ಸ್ಟೈಲೊ
ಸ್ಟೈಲೊ ಸ್ಟೈಲೊ ಜಗಜಗಮಗ ಸ್ಟೈಲೊ